Slide
Slide
Slide
previous arrow
next arrow

ಪ್ರತಿಭಾ ಕಾರಂಜಿ, ಸ್ಪೋರ್ಟ್ಸ್’ನಲ್ಲಿ ಬಿಸ್ಲಕೊಪ್ಪ ವಿದ್ಯಾರ್ಥಿಗಳ ಬೇಟೆ

300x250 AD

ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯ ಮಕ್ಕಳು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಹಾಗೂ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ಪದಕ ಬೇಟೆಯಾಡಿದ್ದಾರೆ. ಪ್ರತಿಭಾಕಾರಂಜಿಯ ಕನ್ನಡ ಸಿದ್ಧ ಭಾಷಣದಲ್ಲಿ ದರ್ಶನ್ ಭಟ್ ಪ್ರಥಮ ಹಾಗೂ ಮಿಮಿಕ್ರಿಯಲ್ಲಿ ಗೌತಮ್ ಮಡಿವಾಳ ಪ್ರಥಮ, ಜಾನಪದ ನೃತ್ಯ, ಹಾಸ್ಯ,ಇಂಗ್ಲಿಷ ಭಾಷಣ ,ಚರ್ಚಾಸ್ಪರ್ದೆ, ಭರತನಾಟ್ಯ, ಜನಪದ ಗೀತೆಗಳಲ್ಲಿ ದ್ವಿತೀಯ ಸ್ಥಾನವನ್ನು, ಕವ್ವಾಲಿ, ಕನ್ನಡ ಭಾಷಾ ಭಾಷಣ ದಲ್ಲಿ ತೃತೀಯ ಸ್ಥಾನ ಪಡೆದರು.


ಹಾಗೆಯೇ ತಾಲೂಕು ಮಟ್ಟದ ಕ್ರೀಡಾಕೂಟದ ಚೆಸ್ ನಲ್ಲಿ ದರ್ಶನ್ ಭಟ್ ಪ್ರಥಮ ಹಾಗೂ ಉದ್ದ ಜಿಗಿತ ದಲ್ಲಿ ಲಕ್ಷ್ಮೀ ಹಸಲರ ದ್ವಿತೀಯ, 400 ಮಿ ಓಟದಲ್ಲಿ ಹೇಮಾವತಿ ಮಡಿವಾಳ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟ ಕ್ಕೆ ಅರ್ಹತೆ ಗಳಿಸಿದರು. ಮಕ್ಕಳ ಈ ಸಾಧನೆಗೆ ಹಾಗೂ ತರಬೇತಿ ನೀಡಿದ ಶಿಕ್ಷಕರಿಗೆ ಆಡಳಿತ ಮಂಡಳಿ ಹರ್ಷವ್ಯಕ್ತಪಡಿಸಿ ಅಭಿನಂದಿಸಿದೆ. ಕೊರೋನಾ ನಂತರ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ನಮ್ಮ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ಟ ವಾನಳ್ಳಿ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top